ಕರ್ನಾಟಕ ಕಲಾಶ್ರೀ ಡಾ. ಟಿ ಎಸ್ ಸತ್ಯವತಿಯವರು ತಮ್ಮ ಕಲಾ ಜೀವನದಲ್ಲಿ ಅಸಂಖ್ಯಾತ ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಅವರು ಸಂಸ್ಕೃತ ವಿದ್ವಾಂಸರು ಕೂಡ. ಅವರು ಪ್ರಸ್ತುತದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಸಿಡ್ನಿಯಲ್ಲಿ ಅವರು ಸಾಹಿತ್ಯ ದಿಗ್ಗಜ ದಿವಂಗತ ಪು ತಿ ನ ಅವರ ಕೃತಿಗಳನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಸಾದರಪಡಿಸಿದರು
ಡಾ ಟಿ ಎಸ್ ಸತ್ಯವತಿ ಅವರ ಸಿಡ್ನಿ ಪ್ರವಾಸದ ವೇಳೆಯಲ್ಲಿ, ಎಸ್ ಬಿ ಎಸ್ ರೇಡಿಯೋದ ವೀಣಾ ಸುದರ್ಶನ್ ಮಹಾ ಕಲಾವಿದೆಯ ಸಂದರ್ಶನ ಮಾಡಿದರು. ಸಂದರ್ಶನದಲ್ಲಿ ಡಾ ಸತ್ಯವತಿಯವರು ತಮ್ಮ ಸಂಗೀತ ಜೀವನದ ಆರಂಭ, ಸಾಧನೆಗಳ ಬಗ್ಗೆ ಮಾತನಾಡಿ, ಕರ್ನಾಟಕ ಸಂಗೀತದ ಭವಿಷ್ಯದ ಬಗ್ಗೆ ಕಳಕಳಿ ತೋರಿಸಿದ್ದಾರೆ.
ವಿವರಗಳಿಗೆ ಅಂಕಣ ಆಲಿಸಿರಿ......
Share





